“ಜೆಜೆಎಂ ಜಿಲ್ಲೆಗೆ ವಿಫಲ ಯೋಜನೆ” ಶಾಸಕ ತಾಲೂಕು ಕೆಡಿಪಿ ಸಭೆಯಲ್ಲಿ ಯಶ್ಪಾಲ್ ಆಕ್ರೋಶ
ಜನತಾ ಸುದ್ಧಿ ಬ್ರಹ್ಮಾವರ ಇಲ್ಲಿನ ತಾಲೂಕು ಪಂಚಾಯತ್ನ ತ್ರೈ ಮಾಸಿಕ ಕೆಡಿಪಿ ಸಭೆ ಚಾಂತಾರು ಗ್ರಾಮಪಂಚಾಯತ್ನ ಸಭಾಂಗಣದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆಯಲ್ಲಿ ಬುಧವಾರ ಜರಗಿತು. ಜೆಜೆಎಂ, ಶವಪರೀಕ್ಷೆಗೆ ವೈದ್ಯರ ಸಮಸ್ಯೆ, ಅಸಮರ್ಪಕ ಕೆಎಸ್ಆರ್ಟಿಸಿ ಓಡಾಟ ಸೇರಿದಂತೆ ಹತ್ತು ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಆರೂರು ಪಂಚಾಯತ್ನಲ್ಲಿ ಮೂರನೇ ಪಕ್ಷದ ಪರಿಶೀಲನೆ ಆಗದೇ ಪಂಚಾಯತ್ ಜೆಜೆಎಮ್ ಹಸ್ತಾಂತರ ಮಾಡಿಕೊಳ್ಳಲಾಗಿದೆ. ಇದು ಸರಿಯಲ್ಲ. ಜೆಜೆಎಂ ಎನ್ನುವುದು ಉಡುಪಿ ಜಿಲ್ಲೆಗೆ ವಿಫಲ ಯೋಜನೆಯಾಗಿದೆ. ಸರಿಯಾದ ರೀತಿಯಲ್ಲಿ…

